Tuesday, November 24, 2009

ಭಾವಾತಂಕ !!

ಮುಂಜಾವ ಮಂಜಿನಲಿ ಮಿಂದ,
ಬೆಂಗಾಡ ಬಿಸಿಲಿನಲಿ ಬೆಂದ,
ಸಂಜೆಯಾ ತಂಪಿನಲಿ ತೇಲಿರುವ ಭಾವಗಳೆ..
ಕಾಡದಿರಿ,ಬಾಡದಿರಿ, ರಾತ್ರಿಯಾಗಿಹುದೆಂದು.

ಮುಗ್ದತೆಯ ಮನಸಿನಲಿ ಮೂಡಿರುವ ನೀವು,
ದಗ್ದತೆಯ ಆಳವನು ಕೆದಕದಿರಿ ಇಂದು,
ಭಾಂದವ್ಯದ ಹೆಸರಿನಲಿ ಬಂದಿಸಿದ ಮನವೇ..
ತಣಿಸುವುದು ನಿಮ್ಮನ್ನು ಒಲವ ಧಾರೆಯ ಸುರಿದು.

ಹೊದೆಯಿರಿ ಬೆಚ್ಚನೆಯ ಭರವಸೆಯ ಹೊದಿಕೆ,
ಬೇಡ ನಿಮಗೆ ಇಂದೇ ಎಲ್ಲಾ ಸಾಧಿಸುವ ಬಯಕೆ,
ನಗುತಿಹನು ಚಂದ್ರಮನು..ನೋಡಿ ನಿಮ್ಮ ಅಸಹಾಯಕತೆ..
ಮಲಗಿ ಸುಮ್ಮನೆ,ಇರಲಿ ನಿಮ್ಮೊಳಗೆ ಆ ನಾಳೆಯಾಗುವದೆಂಬ ನಂಬಿಕೆ.

8 comments:

  1. ಶೋಭಾ,
    ತುಂಬಾ ಸುಂದರವಾಗಿದೆ,
    ತೆಲಿರುವ,ರಾತ್ರಿಯಗಿಹುದೆಂದು,ನೊಡಿ
    ಇದರಲ್ಲಿ ಕನ್ನಡ ದೋಷವಿದೆ,
    ಸಾದ್ಯವಾದರೆ ಸರಿ ಪಡಿಸಿ
    ಕವನದ ಆಶಯ ತುಂಬಾ ಇಷ್ಟವಾಯಿತು

    ReplyDelete
  2. ಶೋಭಾ ಮೇಡಂ,
    ನಿಮ್ಮ ಬ್ಲಾಗ ನೋಡಿದೆ
    ಭಾವಗಳ ಬಗ್ಗೆ ಬರೆದ ಕವಿತೆ ಸೋಗಸಾಗಿದೆ
    ಬಿಡಿವಿದ್ದಾಗ ನಿಮ್ಮೆಲ್ಲಾ ಬರಹಗಳನ್ನು ಓದುವೆ
    ಧನ್ಯವಾದಗಳು

    ReplyDelete
  3. ತುಂಬಾ ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  4. what's up madam, it's been a while since you've last posted here!!

    ReplyDelete
  5. Super aag bardideera nodree...........

    ReplyDelete
  6. ತುಂಬಾ ಚೆನ್ನಾಗಿದೆ. ಭಾವಗಳ ನಿಜವಾದ ಸ್ವರೂಪವಿದೆ.
    ಬಾವಾತಂಕವು ನಿಜವಾದ ಆತಂಕವನ್ನು ಸೃಷ್ಠಿ ಮಾಡುತ್ತದೆ.
    ಅವಳ(ಅಥವಾ ಅವನ) ಭಾವಗಳು ಅದೆಷ್ಟು ಕ್ರೂರಿಯಾಗಿರಬಹುದು..?
    "ಕಾಡದಿರಿ" ಎಂದು ಕೇಳಿಕೊಂಡು, ಕಡೆಗೆ ಅವುಗಳಿಗೇ ಭರವಸೆಯ ಮಾತುಗಳನ್ನಾಡಿ ಸುಮ್ಮನಾಗಿಸುವುದು.. ಮೆಚ್ಚತಕ್ಕ ಕಲ್ಪನೆ..!

    ReplyDelete