Saturday, July 31, 2010

ನಿರಂತರ!!


ಕಾರ್ಮೋಡದ ಸಾಲೊಂದು,
ವರುಣಧಾರೆಯ ಜೊತೆ,
ಕವಿಯ ಸೇರಲು ಆಶಿಸುತಿರೆ,
ತಂಗಾಳಿ ತಾ ಅದ ಕಡಲತೀರಕ್ಕೊಯ್ದು,
ಮುತ್ತಾಗಿಸುವೆನೆಂಬ ಭರವಸೆಯಿತ್ತಿತು!

ಕೊನೆಗೆ ಮಳೆಯೊಳಗೊಂದು,
ಸಾಮಾನ್ಯ ಹನಿಗಳ ಜೊತೆ,
ಕಡಲ ಸೇರಿ ನಿರಾಶೆಯಾಗುತಿರೆ,
ಬಿಸಿಲ ಬೇಗೆಯು ಮತ್ತೊಮ್ಮೆ ತಾ ಆಗಸಕ್ಕೊಯ್ದು,
ಕವಿತೆಯಸಾಲಾಗಿಸುವೆನೆಂಬ ಪಣತೊಟ್ಟಿತು!

2 comments: